ಹಿರಿಯ ನಿರ್ಮಾಣ ನಿರ್ವಾಹಕ ಎ ವಿ ರಮೇಶ್ ಬಾಬು ನಿಧನ
Posted date: 24 Tue, Dec 2013 – 03:51:56 PM

ಕನ್ನಡ ಚಿತ್ರ ರಂಗದ ಹಿರಿಯ ನಿರ್ಮಾಣ ನಿರ್ವಾಹಕ ಎ ವಿ ರಮೇಶ್ ಬಾಬು ಅವರು ಮಂಗಳವಾರ (24ನೇ ಡಿಸೆಂಬರ್ 2013) ಹೃದಯಾಘಾತದಿಂದ ಅಸುನೀಗಿದ್ದಾರೆ. ಜೆ ಪಿ ನಗರದ ನಿವಾಸದಲ್ಲಿ ಬಾಬು ಅವರ ಪಾರ್ಥೀವ ಶರೀರವನ್ನು ಇಡಲಾಗಿದ್ದು ಚಿತ್ರರಂಗದ ಕೆಲವರು ಅವರ ನಿಧನಕ್ಕೆ ಸಂತಾಪ ವ್ಯಕ್ತ ಮಾಡಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿರುವ ರಮೇಶ್ ಬಾಬು ಅವರು ಆಗಿನ ಕಾಲದಲ್ಲೇ ಮದ್ರಾಸ್ ನಿರ್ಮಾಣ ನಿರ್ವಾಹಕರ ಸಂಘದ ಸಧಸ್ಯರಾಗಿದ್ದರು. ಕರ್ನಾಟಕ ಚಲನ ಚಿತ್ರ ನಿರ್ಮಾಣ ನಿರ್ವಾಹಕರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಅವರಿಗೆ ಎರಡು ವರ್ಷದ ಹಿಂದೆ ತೆರೆದ ಹೃದಯ ಚಿಕಿತ್ಸೆ ಸಹ ಮಾಡಲಾಗಿತ್ತು.

ಮೃದು ಸ್ವಭಾವ, ನಿರ್ಮಾಣ ನಿರ್ವಹಣೆಯಲ್ಲಿ ಪ್ರವೀಣರಾಗಿದ್ದ ರಮೇಶ್ ಬಾಬು ಅವರು 60 ವಯಸ್ಸಿನಲ್ಲಿ ಸುಮಾರು 40 ವರ್ಷಗಳನ್ನು ಕನ್ನಡ ಸಿನೆಮಾ ನಿರ್ವಹಣೆಯಲ್ಲಿ  ಸಕ್ರಿಯರಾಗಿ 150 ಕನ್ನಡ ಸಿನೆಮಗಳಿಗೆ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತು ದುಡಿದವರು.

ಕನ್ನಡ ಸಿನೆಮಾ ರಂಗದಲ್ಲಿ ಇವರ ಜಾಣ್ಮೆ ಕೆಲಸದಲ್ಲಿ ಕೌಶಲ್ಯ ಹಾಗೂ ಸದ್ಭಾವನೆ ಅವರಿಗೆ ಕಳಶಪ್ರಾಯವಾಗಿತ್ತು.

ರಮೇಶ್ ಬಾಬು ಅವರ ನಿಧನಕ್ಕೆ ಕರ್ನಾಟಕ ಚಲನ ಚಿತ್ರ ನಿರ್ಮಾಣ ನಿರ್ವಾಹಕರ ಸಂಘ ಅವರ ಸೇವೆಯನ್ನು ಶ್ಲಾಘಿಸಿದೆ. ಕನ್ನಡ ಸಿನೆಮಾ ಪ್ರಚಾರಕರ್ತರ ಸಂಘದ ಅಧ್ಯಕ್ಷ ನಾಗೇಂದ್ರ, ಆರ್ ವಿಜಯಕುಮಾರ್, ರಾಘವೇಂದ್ರ ಚಿತ್ರವಾಣಿಯ ಸುಧೀಂದ್ರ ವೆಂಕಟೇಶ್, ಕಲ್ಲೇಶ್, ಆರ್ ಎಸ್ ಹರೀಶ್ ಅವರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed